ಆಸೆ- ಆಶ್ವಾಸನೆ !?!
ಇದು " ಪ್ರವೀಣ್ " ನಲ್ಲಿ ಮೊದಲಿನಿಂದಲೂ ಕಂಡುಬಂದಿರುವ ಒಂದು ಗುಣ. ಇವನಿಗೆ ದ್ವಿತೀಯ ವಿಘ್ನದ ಲಕ್ಷಣ. ಯಾವುದೇ ಕೆಲಸವಾಗಲಿ, ಮೊದಲನೆಯ ದಿನದಂದು ಕಂಡುಬರುವ ಉತ್ಸಾಹ , ಸ್ವಲ್ಪ ದಿನಗಳಲ್ಲೇ ಹಾಗೆ ಉದುಗಿಹೋಗಿಬಿಡುತ್ತದೆ. ಅದು ಅವನು ಪ್ರಾರಂಭಮಾಡಿದ ದಿನಚರಿ ಬರೆಯುವ ಹವ್ಯಾಸವಿರಬಹುದು, ಅಥವಾ ಕನ್ನಡ ಪುಸ್ತಕ ಓದುವ ಆಸಕ್ತಿ ಇರಬಹುದು, ಕಲಿಯುತ್ತಿದ್ದ ವಿ.ಎಲ್.ಎಸ್.ಐ ಇರಬಹುದು, ಇಲ್ಲವೇ ಕಲಿಯುತ್ತಿದ್ದ ಕೊಳಲು ಇರಬಹುದು ಎಲ್ಲದರಲ್ಲೂ ಇನ್-ಕನ್ಸಿಸ್ಟೆನ್ಸಿ ಎದ್ದು ಕಾಣುತ್ತದೆ. ಇವೆಲ್ಲದಕ್ಕೂ ಕಾರಣ ಹುಡುಕಲೆತ್ನಿಸಿದರೆ, ಸಿಗುವ ಉತ್ತರ- "ಗುರು ಸ್ವಲ್ಪ ಬಿಜ಼ಿ ಇದ್ದೆ......ಆಗಲಿಲ್ಲ.....ಅರ್ಥ ಮಾಡಿಕೊಳೋ" ಇವನು ಒಂದಷ್ಟು ದಿನಗಳವರೆಗೆ ಇಂಗ್ಲಿಷ್ ದೈನಿಕ-ಡೆಕನ್ ಹೆರಾಳ್ಡ್ ನ ಸಾಪ್ತಾಹಿಕ ಪುರವಣಿ- ಓಪನ್ ಸೆಸೇಮ್ ನಲ್ಲಿ ಮಕ್ಕಳ ಅಂಕಣದಲ್ಲಿ ಖಾಯಮ್ ಏನಾದರೂ ಬರೆಯುತ್ತಿದ್ದ ಎಂಬುದಾಗಿ ಹೇಳಿದರೆ, ನಂಬಲು ಸಾಧ್ಯವೇ? ಅಸಾಧ್ಯವಾದರೂ ನಂಬಲೇ ಬೇಕು. ಪುರಾವೆ ಕೇಳಿದರೆ........"ಊಹುಂ ನನ್ನಲ್ಲಿ ಇಲ್ಲ" ಎನ್ನುತ್ತಾನೆ. ಅವನಿಗಿನ್ನೂ ನೆನಪಿರಬಹುದು ಅವನಪ್ಪ ಮಾರ್ಕ್ಸ್ ಕಾರ್ಡ್ ನೋಡಿ ಅವನ ಅಮ್ಮನಿಗೆ ಹೇಳುತ್ತಿದ್ದರು-".....ಇಲ್ವೇ ಇವ್ನು ಸೋಶಿಯಲ್ ನಲ್ಲಿ ವೀಕ್ ಇದಾನೆ ಅಥವಾ ಗಣಿತದಲ್ಲಿ ವೀಕ್ ಇದಾನೆ ಅಂತ ಕ್ಯಾಟೆಗೊರೈಸ್ ಮಾಡಕ್ಕೆ ಕಷ್ಟ ಕಣೇ........ ಫ಼ರ್ಸ್ಟ್ ಟೆಸ್ಟ್ ನಲ್ಲಿ ಸೊಶಿಯಲ್ ಗೆ ಕಡಿಮೆ ಮಾರ್ಕ್ಸ, ಮುಂದಿನ ಟೆಸ್ಟ್ ನಲ್ಲಿ ಗಣಿತದಲ್ಲಿ ಕಡಿಮೆ..... ತದನಂತರ ಕನ್ನಡದಲ್ಲಿ......ಮತ್ತೆಯಾವಾಗಲೋ ಹಿಂದಿಯಲ್ಲಿ......" ಇವನ ಕತೆ ಇಂಜಿನೀಯರಿಂಗ್ ನಲ್ಲೂ ಅಷ್ಟೆ. ಮೊದಲನೆಯ ಇಂಟರ್ನಲ್ ನಲ್ಲಿ ಇದ್ದ ಮಾರ್ಕ್ಸ್ ಉಳಿದ ಇಂಟರ್ನಲ್ ಗಳ ಮಾರ್ಕ್ಸ್ ಜೊತೆ ಕಂಪೇರ್ ಮಾಡುವಂತಿರಲಿಲ್ಲ.
ಈ ಇನ್-ಕನ್ಸಿಸ್ಟೆನ್ಸಿಯಿಂದ ಹೊರಬರಲು ಸದಾ ಪ್ರಯತ್ನಿಸುತ್ತಿದ್ದ ಈತ ತನ್ನ ಪ್ರಿಯವಾದ ಹವ್ಯಾಸ- ಬರವಣಿಗೆ ಬಗ್ಗೆ ಹೆಚ್ಚು ಆಸಕ್ತಿವಹಿಸಿ, ಬ್ಲಾಗ್ ಬರೆಯಲಾರಂಭಿಸಿದ. ಎರಡು ಅಂಕಣಗಳನ್ನು ಬರೆದು ಪ್ರಾಯಷಃ ಇನ್ನೇನೂ ಬರೆಯುವುದೇ ಇಲ್ಲವೆನೋ ಎಂದು ಭಾವಿಸಿದ್ದವರಿಗೆ ಮತ್ತೂ ಹಲವು ಅಂಕಣಗಳ ಭರವಸೆ ನೀಡುತ್ತಿದ್ದಾನೆ.
ಅಮೆರಿಕೆಯ ಕನ್ನಡಿಗನೊಬ್ಬನ ಬಗ್ಗೆ, ಪೂಜ್ಯ ಶ್ರೀ ಎಸ್.ಎಲ್.ಭೈರಪ್ಪ ನವರ "ಆವರಣ" ಕಾದಂಬರಿಯ ವಿಶ್ಲೇಷಣೆ, ..................ಮುಂಬರುವ ದಿನಗಳಲ್ಲಿ ನೋಡಬಹುದೇನೋ ಎಂದು ನಂಬುವ..
ನಿಮ್ಮವ,
ಪ್ರಕೊಪ
ಪ್ರವೀಣ್ ಪಟವರ್ಧನ್
Thursday, October 18, 2007
Subscribe to:
Posts (Atom)